೧೯. ಎಲ್ಲಾ ಗೊತ್ತಿದ್ದೂ ಹುಚ್ಚರಂತೇಕೆ ವರ್ತಿಸಬೇಕು?
(ಇಸವಿ ಸನ ೧೯೪೪-೪೫ರ ಸುಮಾರಿಗೆ ಮಾತೋಶ್ರೀ ಕರ್ಕಿ ಗಂಗಕ್ಕನ ಪತ್ರಕ್ಕೆ ಸ್ವಾಮಿಗಳ ಉತ್ತರರೂಪಿ ಪತ್ರ)
|| ಓಂ||
ಚಿಕ್ಕ ಮಗಳೂರು
ಚಿ.ಗಂಗೆಗೆ ಆಶೀರ್ವಾದ,
ಮಗಳೇ,
ನೀನು ಕಾಶಿಯಿಂದ ಸುರಕ್ಷಿತ ಬಂದು ಮುಟ್ಟಿದ್ದು ತಿಳಿದು ಆನಂದವಾಯಿತು. ನಿಜರೂಪದ ಅನುಭವ ಸಿಕ್ಕ ಮೇಲೆ ಶ್ರೀಗುರು ದೂರವಿರುತ್ತಾರೇನು? ಎಲ್ಲಾ ಗೊತ್ತಿದ್ದೂ ಹುಚ್ಚರಂತೇಕೆ ವರ್ತಿಸಬೇಕು? ವಿವೇಕದಿಂದಲೇ ಜಗತ್ತಿನ ಎಲ್ಲ ಆನಂದದ ಪ್ರಾಪ್ತಿಯಾಗುತ್ತದೆ. ನೀನು ವಿವೇಕಿಯಾಗಿರುವದರಿಂದ ನಿನ್ನಲ್ಲಿ ಎಲ್ಲ ಪ್ರಕಾರದ ತತ್ವಜ್ಞಾನದ ಉದಯವಾಗಿದೆ. ನೀನೇ ಹೀಗೆ ಸಣ್ಣ ಮಕ್ಕಳಂತೆ ನಡೆಯಹತ್ತಿದರೆ ವಿವೇಕಿಗಳು ನಿನ್ನನ್ನು ನೋಡಿ ಏನೆನ್ನಬಹುದು? ಇದನ್ನು ನೀನೇ ಹೇಳು. ನನ್ನ ಸಾನಿಧ್ಯದಲ್ಲಿರುವ ಜನರ ಆಚರಣೆಗಳಿಂದ ಬರುವ ಶಾಂತಿಯಿಂದ, ತತ್ವಜ್ಞಾನದ ಪ್ರಾಚುರ್ಯತೆಯಿಂದಲೇ ನನ್ನ ಮಹಾತ್ಮೆ ಹೆಚ್ಚಾಗುತ್ತದೆ. ನಿಮ್ಮ ಆಚರಣೆ ಸಂಸಾರಿ ಮತ್ತು ಪರಮಾರ್ಥಿ ಹೀಗೆ ಎರಡೂ ರೀತಿಯ ಜನರಿಗೆ, ಉನ್ನತ ಜೀವನದ ಅತ್ಯಚ್ಚ ಆದರ್ಶಭೂತ ಉದಾಹರಣೆಯೇ ಆಗಿರಬೇಕು! ಒಳ್ಳೇದು, ಸುಮ್ಮನೇ ಗಡಿಬಿಡಿ ಮಾಡುವದರಿಂದ ಏನೂ ಅರ್ಥವಿಲ್ಲ. ಆತ್ಮನಿಷ್ಠೆಯ ಪ್ರತಿಷ್ಠೆಯಿಂದ, ಜಾಗ್ರತಿಯಿಂದ ಶ್ರೀಗುರುಸಾನಿಧ್ಯ ಪ್ರಾಪ್ತವಾಗುತ್ತದೆ ಎಂಬುದನ್ನು ಲಕ್ಷದಲ್ಲಿಟ್ಟಿಕೋ. ನಿನ್ನ ಅಣ್ಣನಿಗೆ ಬರೆದ ಪತ್ರದಲ್ಲಿ ಎಲ್ಲ ವಿಚಾರ ಸ್ಪಷ್ಟ ಬರೆದಿದ್ದೇನೆ. ಮತ್ತೆಲ್ಲಾ ಕ್ಷೇಮ.
ಪ್ರಾಣಿಮಾತ್ರರ ಶುದ್ಧಸ್ವರೂಪ
ಶ್ರೀಧರ