೩೮. ಉನ್ನತಿಯನ್ನು ನಾವೇ ಇಚ್ಛಾಪೂರ್ವಕ ಮಾಡಿಕೊಳ್ಳುವದಿರುತ್ತದೆ
(ಇಸವಿ ಸನ ೧೯೫೦-೫೧ರ ಸುಮಾರಿಗೆ ನೀಲಕಂಠ ರಾಮದಾಸಿ ಅವರಿಗೆ ಬರೆದ ಪತ್ರ)
|| ಶ್ರೀರಾಮ ಸಮರ್ಥ||
ಕುರುಗಡ್ಡಿ
ಚಿ. ನೀಲಕಂಠನಿಗೆ ಆಶೀರ್ವಾದ,
ಮಗಾ,
ನನ್ನ ಪ್ರೇಮ ಎಲ್ಲರ ಮೇಲೆ ಒಂದೇ ರೀತಿ ಇದೆ. ನಾನು ಅಂದರೆ ಪ್ರಾಣಿಮಾತ್ರರ ಕೇವಲ ಹಿತದೃಷ್ಟಿಯದೇ ಕೊರೆದ ಮೂರ್ತಿ. ನೀವು ಗುರುಕೃಪೆಯ ಲಾಭ ಮಾಡಿಕೊಂಡು ನಿಮ್ಮ ಆಚಾರ-ವಿಚಾರ ಸ್ವಪರ ಉನ್ನತಿಕಾರಕ ಪರಿಣಾಮಕಾರಕವಾಗುವಂತೆ ಇರಬೇಕು. ಹೀಗೆಯೇ ನಿಮ್ಮ ಪ್ರತಿಕ್ಷಣದ ಜೀವನಕ್ರಮ ಇರಬೇಕು. ಉನ್ನತಿಯನ್ನು ನಾವೇ
ಇಚ್ಛಾಪೂರ್ವಕ ಮಾಡಿಕೊಳ್ಳುವದಿರುತ್ತದೆ. ನಮ್ಮ ಮನಸ್ಸೇ ನಮಗೆ ಸಾಕ್ಷಿ. ಅದನ್ನೇ ಪ್ರಶ್ನೆ ಮಾಡು. ಇಲ್ಲಿಯವರೆಗೆ ನಿನ್ನ ಆಚರಣೆ ಸಮಾಧಾನಕಾರಕ ಮತ್ತು ಪ್ರಗತಿಪರ ಅನಿಸುತ್ತಿಲ್ಲ. ಹಾಗಾಗಿ ಮುಂದಾದರೂ ಪಶ್ಚಾತ್ತಾಪದಿಂದ ಸುಧಾರಣೆ ಮಾಡಿಕೊಂಡು ಹೊಸ ಹುರುಪಿನಿಂದ ಸಾಧನೆಗೆ ಹತ್ತು. ನನ್ನ ಕೃಪೆ ಯಾವಾಗಲೂ ಇದೆ. ಉತ್ತರೋತ್ತರ ನಿನ್ನ ಉನ್ನತಿಯಾಗಲಿ.
ಚಿ. ಕುಲಕರ್ಣಿ ಬಂದು ಹೋಗುವವರ ಆತಿಥ್ಯ ಬಹಳ ಚೆನ್ನಾಗಿ ಮಾಡುತ್ತಾರೆಂದು ಕೇಳಿ ಆನಂದವಾಯಿತು.
ಎಲ್ಲರಿಗೂ ಆಶೀರ್ವಾದಗಳು.
ಶ್ರೀಧರ