Letters

Letters 4 – Consolatory & Advisory to Lady Devotees

೪. ‘ಇದರಲ್ಲಿ ನಿನ್ನ ಬಹಳಿಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದು!’
(ಇಸವಿ ಸನ ೧೯೪೩-೪೪ರ ಸುಮಾರಿಗೆ ಕು. ರಾಧಾಳು ತನ್ನ ಕಿಶೋರಾವಸ್ಥೆಯಲ್ಲಿ ಸ್ವಾಮಿಗಳಿಗೆ ಬರೆದ ಪತ್ರಕ್ಕೆ ಸ್ವಾಮಿಗಳ ಉತ್ತರದ ಮೊದಲ ಭಾಗ)

ಕಾಸರಗೋಡ
ಚಿ. ರಾಧೆಗೆ ಆಶೀರ್ವಾದ
ಶ್ರೀರಾಮನವಮಿ ಇಲ್ಲೇ ಆಯಿತು. ಭಕ್ತಿಮಾರ್ಗದ ಮೇಲೆ ಮೂರು ದಿನ ವ್ಯಾಖ್ಯಾನವಾಗಿ, ಶ್ರೀರಾಮನವಮಿಯ ದಿನ ‘ರಾಮಾವತಾರದ ವೈಶಿಷ್ಟ್ಯ’ ಎಂಬ ವಿಷಯದ ಮೇಲೆ ವ್ಯಾಖ್ಯಾನವಾಯಿತು. ೧.ಶ್ರೀ ಸಮರ್ಥರ ಅವತಾರ ಕಾರ್ಯ ೨. ಆರ್ಯ ೩. ನಾನು ಯಾರು ಅಥವಾ ನಾನು ಅಂದರೆ ಏನು? ೪.ಮಾರುತಿಯ ಮಹತ್ವ ೫. ತರುಣರ ಕರ್ತವ್ಯ – ಈ ರೀತಿ ವ್ಯಾಖ್ಯಾನಗಳು ನಿಶ್ಚಿತವಾಗಿದ್ದರಿಂದ ಸೋಮವಾರದವರೆಗೆ ಎಲ್ಲೂ ಹೋಗಲಿಕ್ಕೆ ಆಗುವಂತಿಲ್ಲ. ನಂತರ ರಾಮೇಶ್ವರಕ್ಕೆ ಹೋಗಿಬರಬೇಕೆಂದಿದೆ. ಅಲ್ಲಿ ಹತ್ತು-ಹದಿನೈದು ದಿನಗಳಾದರೂ ಕಳೆಯಬೇಕಾಗುತ್ತದೆ.

ನಾನಿಲ್ಲಿಗೆ ಬಂದ ಸ್ಮರಣೆ ಯಾವಾಗಲೂ ಇರಬೇಕೆಂದು ಒಬ್ಬನು ೧೦೦೫ ರೂಪಾಯಿ ಪ್ರತಿವರ್ಷ ಶ್ರೀರಾಮನವಮಿಯ ಉತ್ಸವ ನಡೆಸಲಿಕ್ಕೆ ಕೊಟ್ಟನು. ಆ ಹಣದ ಬಡ್ಡಿಯಿಂದ ಕಾಸರಗೋಡಿನ ವೆಂಕಟರಮಣ ದೇವಸ್ಥಾನ ಸಮಿತಿಯವರು ಪ್ರತಿವರ್ಷ ಉತ್ಸವ ನಡೆಸುವರೆಂದು ನಿರ್ಣಯಿಸಲಾಗಿದೆ. ಕಡಿಮೆ ಬಿದ್ದ ಹಣವನ್ನು ವರ್ಗಣಿಯ ಮೂಲಕ ಪೂರ್ಣಗೊಳಿಸಿ ನಿಮ್ಮ ನೆನಪಿಗೆಂದು ನಾವೆಲ್ಲ ಕೂಡಿ ಪ್ರತಿವರ್ಷ ಈ ಉತ್ಸವ ದೊಡ್ಡ ಉತ್ಸಾಹದಿಂದ ಮಾಡುತ್ತೇವೆ, ಎಂದು ಸಮಿತಿಯವರು ಆಶ್ವಾಸನಕೊಟ್ಟಿದ್ದಾರೆ. ಹನುಮಂತ ಜಯಂತಿಯೂ ಬಹಳಿಷ್ಟು ವರ್ಷಗಳಿಂದ ನಡೆಯುತ್ತಿಲ್ಲ. ಅದನ್ನು ಈ ಸುಸಂದರ್ಭದಲ್ಲೇ ಪುನಃ ಪ್ರಾರಂಭಿಸಬೇಕೆಂದು ನನ್ನನ್ನು ಸಮಿತಿಯವರು ಆಗ್ರಹದಿಂದ ಇಲ್ಲೇ ಉಳಿಸಿಕೊಂಡಿದ್ದಾರೆ.

ನಿನ್ನ ಪತ್ರ ನನಗೆ ಮಂಗಳೂರಲ್ಲೇ ಸಿಕ್ಕಿತ್ತು. ವೇಳೆ ಮಾಡಿಕೊಂಡು ಸಾವಕಾಶ ಓದಿ ಉತ್ತರ ಬರೆಯಬೇಕೆಂದಿದ್ದೆ. ಆದರೆ ಆ ಪತ್ರ ಕಾಸರಗೋಡಿಗೆ ತರಲು ಮರೆತುಬಿಟ್ಟೆ. ನಿನಗೆ ಪತ್ರ ಬರೆಯಬೇಕೆಂದು ಇಂದು ಚಿ.ವಿಠ್ಠಲನು ಆಗ್ರಹ ಮಾಡಿದನು. ನಿನ್ನ ಪ್ರಶ್ನೆಯೇನಿತ್ತು ಎಂದು ಆತನಿಗೆ ಸರಿಯಾಗಿ ಹೇಳಲಿಕ್ಕೆ ಆಗಲಿಲ್ಲ. ಆದರೂ ಒಟ್ಟಿನ ಮೇಲೆ ನಿನಗೆ ಸಮಾಧಾನವಾಗುವಂತೆ ಕೆಲ ವಿಷಯಗಳನ್ನು ಬರೆಯುತ್ತೇನೆ. ಇದರಲ್ಲಿ ನಿನ್ನ ಬಹಳಿಷ್ಟು ಪ್ರಶ್ನೆಗಳ ಉತ್ತರ ಸಿಕ್ಕೇ ಸಿಗುತ್ತವೆ!

(ಪತ್ರದ ಎರಡನೆಯ ಭಾಗ ಮುಂದುವರಿದಿದೆ)

home-last-sec-img